ಬೀದರ್: ಗೋಡಂಬಿ ಬೆಳೆಯಲು ಬೀದರ್ ಜಿಲ್ಲೆಯಲ್ಲಿ ಸೂಕ್ತ ಹವಾಗುಣ ಇದೆ. ರೈತರು ಗೋಡಂಬಿ ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾ ಯಿತಿ ಸಿಇಒ ಆರ್.ಸೆಲ್ವಮಣಿ ಹೇಳಿದರು.
ಇಲ್ಲಿಯ ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಕೊಚ್ಚಿಯ ಗೋಡಂಬಿ, ಕೊಕ್ಕೊ ಅಭಿವೃದ್ಧಿ ನಿರ್ದೇಶ ನಾಲಯದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಗೋಡಂಬಿಯ ಆಧುನಿಕ ಬೇಸಾಯ ಪದ್ಧತಿ’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.
ಸಂಸ್ಕರಣೆ ಮಾಡಿದ ಗೋಡಂಬಿ ಉತ್ಪನ್ನಗಳ ಮಾರಾಟಕ್ಕೆ ಅನು ಕೂಲವಾಗುವಂತೆ ಮಾರಾಟ ಮಳಿ ಗೆಗಳನ್ನು ನಿರ್ಮಿಸಲು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ಎಸ್.ಐ. ಹಣಮಶೆಟ್ಟಿ ಮಾತನಾಡಿ, ಆಧುನಿಕ ಬೇಸಾಯ ಪದ್ಧತಿ ಅನುಸರಿಸಲು ಬೀದರ್ ಜಿಲ್ಲೆ ಸೂಕ್ತವಾಗಿದೆ ಎಂದು ಹೇಳಿದರು.
ಪುತ್ತೂರಿನ ಗೋಡಂಬಿ ಸಂಶೋಧ ನಾ ನಿರ್ದೇಶನಾಲಯದ ಡಾ. ಬಾಲಸುಬ್ರಹ್ಮಣ್ಯ ಅವರು ಗೋಡಂಬಿ ಬೀಜ ಮತ್ತು ಹಣ್ಣಿನ ವಿವಿಧ ಉತ್ಪನ್ನಗಳ ತಯಾರಿಕೆ ಕುರಿತು ಉಪನ್ಯಾಸ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಮ್ಮನಗಟ್ಟಿ ಮಾತನಾಡಿದರು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ರವೀಂದ್ರ ಮೂಲಗೆ ಅಧ್ಯಕ್ಷತೆ ವಹಿಸಿದ್ದರು.
ರೇವಣ್ಣ, ರಾಜೇಶ ರಸ್ಕರ್ ಇದ್ದರು. ಡಾ.ಶ್ರೀನಿವಾಸ ಎನ್. ನಿರೂಪಿಸಿದರು. ಪ್ರವೀಣಕುಮಾರ ನಾಯಿಕೋಡಿ ಸ್ವಾಗತಿಸಿದರು. ತಿಪ್ಪಣ್ಣ ಕೆ.ಎಸ್. ವಂದಿಸಿದರು.