ಸರ್ವಿಸಸ್ ಎದುರು ಸೋಲು ಕಂಡಿದ್ದರಿಂದ ಪ್ರಶಸ್ತಿ ಕೈತಪ್ಪಿತ್ತು. ಈ ಬಾರಿ ಪಿ.ಉಸ್ಮಾನ್ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಯಶಸ್ವಿಯಾಗಿ ಪ್ರಶಸ್ತಿ ಸುತ್ತು ತಲುಪುವ ಉತ್ಸಾಹದಲ್ಲಿದೆ. 31 ಬಾರಿ ಸಂತೋಷ್ ಟ್ರೋಫಿ ಎತ್ತಿಹಿಡಿದಿರುವ ಇತಿಹಾಸ ಹೊಂದಿರುವ ಬಂಗಾಳ ತಂಡ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮಿಜೋರಾಂ ಎದುರು ಆಡಲಿದೆ.
ಎರಡು ದಿನದ ಹಿಂದೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಿಜೋರಾಂ ತಂಡ ಸರ್ವಿಸಸ್ ಎದುರು 5–1 ಗೋಲುಗಳಲ್ಲಿ ಜಯ ದಾಖಲಿಸಿತ್ತು.