ಭೂತಾಯಿಯ ಒಡಲನ್ನು ಮನಸೊ ಇಚ್ಛೆ ಕೊರೆದು ಮುಂದಿನ ಪೀಳಿಗೆಗೆ ನೀರೇ ಇಲ್ಲದಂತಾಗಿದೆ. ನಿಯಮ ಮೀರಿ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಯಿಸಿ ಭೂಗರ್ಭವನ್ನು ನಾಶಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಂತರ್ಜಲ ವೃದ್ಧಿಗಾಗಿ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ–ಕಟ್ಟೆಗಳನ್ನು ಉಳಿಸಬೇಕಿದೆ. ಗಿಡಮರಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು ಎಂದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕ ಅಧ್ಯಕ್ಷೆ ದೇವಿ ಮಾತನಾಡಿ, ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸುನೀತಾ, ಮಂಜುಳಾ, ಪ್ರೇಮಾ, ವರಲಕ್ಷ್ಮಿ, ಸರಿತಾ, ಕಾಮಾಕ್ಷಿ, ಕೆಂಪಮ್ಮ, ಪ್ರೇಮಾ, ರೂಪಾ, ವಿಜಯಾ, ಪಿಡಿಒ ರುದ್ರಯ್ಯ ಇದ್ದರು.
ಒಂದು ವಾರದಿಂದ ತಳಗವಾದಿ ಕೆರೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 150ಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲೇ ಮಹಿಳಾ ದಿನಾಚರಣೆ ಹಾಗೂ ವಿಶ್ವಜಲ ದಿನಾಚರಣೆ ನಡೆದದ್ದು ಗಮನ ಸೆಳೆಯಿತು.