ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಜಿ.ಪರಮೇಶ್ವರ್, ‘ನೋಟು ರದ್ದತಿಯಿಂದ ಅನೇಕರಿಗೆ ಸಮಸ್ಯೆಯಾಗಿದೆ. ದೇಶ–ವಿದೇಶದ ಅನೇಕ ಆರ್ಥಿಕ ತಜ್ಞರು ಇದನ್ನು ವಿರೋಧಿಸಿದ್ದಾರೆ. ಇದರಿಂದ ದೇಶದ ಜಿಡಿಪಿ ಶೇ 2ಕ್ಕೆ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ’ ಎಂದರು. ಕಾಂಗ್ರೆಸ್ನ ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ, ಎನ್. ಎಸ್. ಬೋಸರಾಜ್ ಇದನ್ನು ವಿರೋ ಧಿಸಿ, ‘ಉತ್ತರ ಪ್ರದೇಶದಲ್ಲಿ ಆಂಬ್ಯುಲೆ ನ್ಸ್ನಲ್ಲಿ ಹಣ ಸರಬರಾಜು ಆಗಿದೆ. ಎಲ್ಲ ಚುನಾವಣೆಗಳನ್ನು ನೀವು ಹೇಗೆ ಗೆದ್ದಿ ದ್ದೀರಿ ಎಂದು ಗೊತ್ತಿದೆ’ ಎಂದರು.