ಕಲಾರಂಗದ ಕೆಲಸವನ್ನು ಅವರು ತುಂಬಾ ಮೆಚ್ಚಿಕೊಂಡಿದ್ದರು. ಗಂಗಯ್ಯ ಶೆಟ್ಟಿ ಅವರಿಗೆ ಬಿ.ಬಿ. ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ನೆನಪು ಮಾಡಿಕೊಂಡರು.
ವಿಜಯನಾಥ ಶೆಣೈ ಅವರ ಬಗ್ಗೆ ಮಾತನಾಡಿದ ಕಲಾವಿದ ಪುರುಷೋ ತ್ತಮ ಅಡ್ವೆ, ವಿಜಯನಾಥ ಶೆಣೈ ಅವರು ಸಾಮಾನ್ಯರಂತೆ ಕಾಣುತ್ತಿದ್ದರೂ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.
ಅವರು ಹಣಕ್ಕಾಗಿ ಹೆರಿಟೇಜ್ ವಿಲೇಜ್ ನಿರ್ಮಾಣ ಮಾಡಲಿಲ್ಲ. ಜನರ ಜೀವನ ವನ್ನು ಅವರು ಅಧ್ಯಯನ ಮಾಡುತ್ತಿ ದ್ದರು. ಪಾರಂಪರಿಕ ಕಟ್ಟಡಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಯಾರಾದರೂ ಮನೆ ಕೆಡವಲು ಮುಂ ದಾದರೆ ಅವರ ಮನವೊಲಿಸಿ ಮನೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದರು.
ಸಂಗೀತಾ ಸಭಾ ಆರಂಭಿಸಿದ ವಿಜಯನಾಥ ಶೆಣೈ ಅವರು ದಿಗ್ಗಜ ಸಂಗೀತ ಕಲಾವಿದರನ್ನು ಉಡುಪಿಗೆ ಆಹ್ವಾನಿಸಿದರು. ಮಹಾನ್ ಕಲಾವಿದ ರನ್ನು ನೋಡುವ ಅವಕಾಶವನ್ನು ಉಡುಪಿ ಜನರಿಗೆ ಕಲ್ಪಿಸಿದರು ಎಂದು ಹೇಳಿದರು. ಕೆ.ಪಿ. ರಾವ್, ಪುಂಡರೀಕಾಕ್ಷ ಉಪಸ್ಥಿತರಿದ್ದರು.