ಅಜಯಕುಮಾರ್ ಸಿಂಗ್ ಮಾತನಾಡಿ, ‘ಸಮಾಜದಲ್ಲಿನ ಅಸಹಿಷ್ಣುತೆ ನಿವಾರಿಸಿ, ಸಾಮರಸ್ಯ ಮೂಡಿಸುವ ವಿಸ್ತೃತ ದೃಷ್ಟಿಕೋನವನ್ನು ಚಿತ್ರಕಲೆ ಹೊಂದಿದೆ. ರಂಗಭೂಮಿ, ಸಾಹಿತ್ಯ, ಚಿತ್ರಕಲೆ ಸೀಮಿತ ಅರ್ಥದ ಆಚೆಗಿನ ವಿಶಾಲತೆಯನ್ನು ಒಗ್ಗೂಡಿಸುತ್ತವೆ. ಇವು ಯಾವುದೇ ಜಾತಿ, ಧರ್ಮದ ಹಂಗಿಲ್ಲದ ಕ್ಷೇತ್ರಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.