ಬೆಂಗಳೂರು: ಸಾರ್ವಜನಿಕರಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಲಮಂಡಳಿಯು ಜಯನಗರದ 5ನೇ ಬ್ಲಾಕ್ನಲ್ಲಿ 1.1 ಎಕರೆಯಲ್ಲಿ ನಿರ್ಮಿಸಿರುವ ‘ಸರ್ ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ’ಕ್ಕೆ ಈಗ ಆರು ವರ್ಷ ತುಂಬಿದೆ.
ನಗರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು 2009ರಲ್ಲಿ ಕಡ್ಡಾಯ ಮಾಡಲಾಗಿತ್ತು. ಜನರಿಗೆ ಈ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ 2011ರ ಮಾರ್ಚ್ನಲ್ಲಿ ಈ ಕೇಂದ್ರ ಆರಂಭಿಸಲಾಗಿತ್ತು. ಮಳೆ ನೀರು ಸಂಗ್ರಹದ 26 ಮಾದರಿಗಳು ಇಲ್ಲಿವೆ.
ಮಂಡಳಿಯು ಇಲ್ಲಿಯವರೆಗೆ 1600 ಗುತ್ತಿಗೆದಾರರಿಗೆ ತರಬೇತಿ ನೀಡಿದೆ. 35 ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080– 26653666 ಸಂಪರ್ಕಿಸಬಹುದು.