ಕೆಜಿಎಫ್: ನಗರದ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವಾಗ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯು ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿದೆ.
ರಾಜ್ಯ ಮಾನವ ಹಕ್ಕುಗಳ ಆಯೋ ಗವು ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡ ಳಿತಕ್ಕೆ ಸೂಚನೆ ನೀಡಿತ್ತು. ಕಾಮಗಾರಿ ಬಗ್ಗೆ ವರದಿ ನೀಡುವಂತೆ ತಿಳಿಸಿತ್ತು.
ಸ್ಕೂಲ್ ಆಫ್ ಮೈನ್ಸ್ನಿಂದ ರಾಬರ್ಟಸನ್ಪೇಟೆಯ ಎಂ.ಜಿ.ವೃತ್ತದವ ರೆವಿಗೂ ರಸ್ತೆ ವಿಸ್ತರಣೆಗಾಗಿ ಲೋಕೋಪ ಯೋಗಿ ಇಲಾಖೆ ಇತ್ತೀಚೆಗೆ ತೆರವು ಕಾರ್ಯಾಚರಣೆ ನಡೆಸಿತ್ತು.
174 ಕಟ್ಟಡ ಗಳ ತೆರವಿಗೆ ಮುಂದಾಗಿತ್ತು. ಹದಿನೈದು ಕಟ್ಟಡ ಮಾಲೀಕರು ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿ ದ್ದರು. ಈಗ ಹನ್ನೆರಡು ಕಟ್ಟಡ ಮಾಲೀಕರು ಕೂಡ ತಡೆಯಾಜ್ಞೆ ತಂದಿದ್ದಾರೆ.
ತಡೆಯಾಜ್ಞೆ ತಂದಿದ್ದ ಕಟ್ಟಡಗಳನ್ನು ಹೊರೆತಾಗಿ ಇತರ ಕಟ್ಟಡಗಳನ್ನು ಇಲಾಖೆಯ ತೆರವು ಗೊಳಿಸಲು ಪೊಲೀಸ್ ಇಲಾಖೆಯ ಸಹಕಾರದಿಂದ ನಡೆಸಿದ ಕಾರ್ಯಾಚರಣೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಕಾರ್ಯಕರ್ತರು ರಸ್ತೆ ವಿಸ್ತರಣೆ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಆರ್ಪಿಐ ಮಾಜಿ ಶಾಸಕ ಎಸ್.ರಾಜೇಂದ್ರನ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ತಕರ ಮೂಲಕ ದೂರು ಸಲ್ಲಿಸಿದ್ದರು.