ಜಾತ್ರೆ ಸಮಯದಲ್ಲಿ ಪ್ರತಿದಿನ ವಿಷ್ಣುವಿನ ದಶಾವತಾರಗಳ ಮೆರವಣಿಗೆ ನಡೆಯುತ್ತದೆ. ಒಂಬತ್ತನೆಯ ದಿನಕ್ಕೆ ರಾತ್ರಿಯಿಡೀ ಝಗಮಗಿಸುವ ಬೆಳಕಿನಲ್ಲಿ ಗರುಡವಾಹನನ ಸೇವೆ, ಮೆರವಣಿಗೆ ಗಮನ ಸೆಳೆಯುತ್ತದೆ. ಹುಣ್ಣಿಮೆಯದಿನ ಬೆಳದಿಂಗಳ ಚಂದಿರನ ಬೆಳಕಿನಲ್ಲಿ ರಥ ಮುಂದೆ ಮುಂದೆ ಸಾಗುತ್ತಿದ್ದರೆ ಸಹಸ್ರಾರು ಭಕ್ತಾದಿಗಳ ಜಯಘೋಷ, ಹರ್ಷೋದ್ಘಾರದ ನಡುವೆ ಬಾಳೆಹಣ್ಣು, ಉತ್ತತ್ತಿಗಳನ್ನು ರಥದ ಮೇಲೆ ಎಸೆಯುವ ಕಾರ್ಯಕ್ರಮ ನಡೆಯುತ್ತದೆ.