ಪ್ರವಾಸಿಗರ ಕೊರತೆಯಿಂದ ಕೆಲವು ವರ್ಷಗಳ ಹಿಂದೆ ನಿಂತು ಹೊಗಿದ್ದ ವಿಮಾನ ನಿಲ್ದಾಣ ಪುನಃ ತನ್ನ ಸೇವೆ ಆರಂಭಿಸಲಿದೆ. ಈ ವಿಮಾನ ಸೇವೆ ಸೊಲ್ಲಾಪುರ- ಮುಂಬೈ ನಡುವಿನ ಅಂತರ ಕಡಿಮೆಯಾಗಲಿದೆ. ಕೇವಲ ಒಂದು ಗಂಟೆಯಲ್ಲಿ ಮುಂಬೈ ತಲುಪಬಹುದಾಗಿದೆ. ದ್ರಾಕ್ಷಿ, ದಾಳಿಂಬೆ, ಬಾರೆಕಾಯಿ, ಟ್ಯಾವೆಲ್, ಚಾದರ್ ಮುಂತಾದ ವ್ಯಾಪಾರಿಗಳಿಗೆ ಅನಕೂಲವಾಗಲಿದ್ದು ಸೊಲ್ಲಾಪುರ ಮತ್ತು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಪ್ರವಾಸೊದ್ಯಮಕ್ಕೆ ಚಾಲನೆ ದೊರಕಲಿದೆ.