ಮದ್ದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ತೈಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಚರಿಸಿದ ಜಯಂತಿಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕ ಕೆ.ಪಿ.ನಾಗೇಶ್, ಶಿಕ್ಷಕರಾದ ಸವಿತಾ, ವಸಂತಕುಮಾರ್, ಲಕ್ಷ್ಮಿ, ದೇವಿಕಾ, ಕಾಂತರಾಜು, ಕಾವೇರಿ, ಸುಜಾತ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರದ ಚಂದ್ರಶೇಖರ್, ಶಿಕ್ಷಕರಾದ ವೆಂಕಟೇಶ್, ರಮೇಶ್, ಜಯಮ್ಮ, ರವೀಶ್ ಇದ್ದರು.