‘28 ಎಕರೆ ಜಮೀನು ಹೊಂದಿರುವ ನಾನು ವಿಜಯಾ ಬ್ಯಾಂಕ್ ಸೇರಿದಂತೆ ವಿವಿಧೆಡೆ ಒಟ್ಟು ₹8 ಲಕ್ಷ ಸಾಲ ಮಾಡಿದ್ದೆ. ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೇ ಇರುವುದರಿಂದ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಹಾಕಿದ್ದ ಬೆಳೆಯು ಕೈಗೆ ಬರಲಿಲ್ಲ. ಸರ್ಕಾರ ಕೊನೆಗೂ ₹10,880 ಬೆಳೆ ಪರಿಹಾರವನ್ನು ಖಾತೆಗೆ ಹಾಕಿತ್ತು. ಅದು ಕೈ ಸೇರುವ ಮುನ್ನವೇ ವಿಜಯಾ ಬ್ಯಾಂಕ್ ಭಂಡಿವಾಡ ಶಾಖೆಯಲ್ಲಿ ಮುರಿದುಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.