‘ರಾಮಾಯಣ’ವನ್ನು ಬರೆದ ವಾಲ್ಮೀಕಿ ಜಯಂತಿಗೆ ನಮ್ಮ ರಾಜ್ಯದಲ್ಲಿ ರಜೆ. ಆದರೆ ರಾಮಾಯಣದ ನಾಯಕನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜಯಂತಿಗೆ ರಜೆಯಿಲ್ಲ. ಶ್ರೀಕೃಷ್ಣನ ಪರಮಭಕ್ತನಾದ ಕನಕದಾಸ ಜಯಂತಿಗೆ ರಜೆ. ಆದರೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ರಜೆಯಿಲ್ಲ. ಅಂತೆಯೇ ಕರ್ನಾಟಕದಲ್ಲೇ ಜನಿಸಿ ಇಡೀ ಭಾರತ ದೇಶದ ತುಂಬೆಲ್ಲ ಪೂಜಿತರಾಗುತ್ತಿರುವ ಹನುಮ ಜಯಂತಿಗೂ ರಜೆಯಿಲ್ಲ.
ಇದಕ್ಕೆ ಕಾರಣ, ತಮ್ಮನ್ನು ವಾಲ್ಮೀಕಿ ಹಾಗೂ ಕನಕದಾಸರೊಂದಿಗೆ ಗುರುತಿಸಿಕೊಂಡಿರುವ ಜಾತಿಗಳ ಜನಬಲ ಮತ್ತು ಅವರಿಂದ ದೊರೆಯಬಹುದಾದ ವೋಟಿನ ಆಮಿಷ. ಜನಬಲದ ಮುಂದೆ ತಲೆಬಾಗಬೇಕಾದ ಆಳುವವರ ಅಸಹಾಯಕತೆ. ಜನಬಲಕ್ಕೆ ಮತಬಲಕ್ಕೆ ಜೈ. -ಮುರಲೀಧರ ಕುಲಕರ್ಣಿ, ಬೀದರ್