ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಉಪಮೇಯರ್ ಲಕ್ಷ್ಮಿಬಾಯಿ ಬಿಜವಾಡ ಮಾತನಾಡಿ, ‘ಇಂತಹ ಮೇಳಗಳಿಂದ ಸಿವಿಲ್ ಎಂಜಿನಿಯರ್ಗಳು,ಉದ್ಯಮಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಅಲ್ಪ ಸಮಯದಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯವಾದ ತಾಂತ್ರಿಕತೆಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ’ ಎಂದರು.
ಕಾನ್ ಮ್ಯಾಟ್ ಅಧ್ಯಕ್ಷ ಬಿ. ಮಹೇಶ ಅವರನ್ನು ಸನ್ಮಾನಿಸಲಾಯಿತು. ಎಸಿಸಿಇ ಅಧ್ಯಕ್ಷ ಅಶೋಕ ಕೆ. ಬಸವಾ, ಕಾರ್ಯದರ್ಶಿ ಶ್ರೀಕಾಂತ ವಿ. ಪಾಟೀಲ, ಎಸಿಸಿಇ ಇಂಡಿಯಾ ಅಧ್ಯಕ್ಷ ಸುರೇಶ ಕಿರೇಸೂರ, ಕಾರ್ಯದರ್ಶಿ ಎನ್.ಎಸ್. ನಾಡಗೀರ ವೇದಿಕೆಯಲ್ಲಿದ್ದರು.