ಕೂಡ್ಲಿಗಿ: ತಾಲ್ಲೂಕಿನ ರಸ್ತೆ ಬದಿ ಗಿಡಗಳು ಬಿಸಿಲ ಬೇಗೆಗೆ ಸೊರಗಿ ಒಣಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಟ್ಯಾಂಕರ್ಗಳ ನೀರು ಹಾಕಿ ನಳ ನಳಿಸುವಂತೆ ಮಾಡುತ್ತಿದೆ.ಕಳೆದ ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ಅರಣ್ಯ ಇಲಾಖೆಯಿಂದ ಕೂಡ್ಲಿಗಿ ಸೇರಿದಂತೆ ತಾಲ್ಲೂಕಿನ ಕೊಟ್ಟೂರು ಪಟ್ಟಣ, ಶಿವಪುರ ಮತ್ತು ಬಡೇಲಡಕು ಗ್ರಾಮಗಳ ರಸ್ತೆಗಳ ಬದಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆ, ಗಾಂಧೀ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ, ಸಂತೆ ಮೈದಾನ, ಶ್ರೀ ನಗರ ಸೇರಿದಂತೆ ವಿವಿಧೆಡೆ 1200 ಗಿಡ ನೆಡಲಾಗಿತ್ತು.