‘ಮಕ್ಕಳು ಪ್ರತಿದಿನ ದೇವರ ಶ್ಲೋಕ, ಸಂಕೀರ್ತನೆಗಳನ್ನು ಪಠಿಸಬೇಕು. ದೇವರ ಭಕ್ತಿ ಹಾಗೂ ದೇಶ ಭಕ್ತಿ ನಮ್ಮಲ್ಲಿರ ಬೇಕು. ಅದು ಇಲ್ಲದಿದ್ದರೆ ನಮ್ಮ ಯಾವುದೇ ಕಾರ್ಯ ಸಾರ್ಥಕತೆಯನ್ನು ಪಡೆಯುವುದಿಲ್ಲ’ ಎಂದರು.‘ಹಿಂದೂ ಧರ್ಮದಿಂದಲೇ ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ಕಲಿತುಕೊಂಡವರು, ಇಂದು ನಮಗಿಂತ ಉತ್ತಮ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂ ಧರ್ಮದಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಿದರೆ, ಕ್ರಿಶ್ಚಿಯನ್ ಧರ್ಮದಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ, ಹಿಂದುಗಳು ಸರಳವಾದ ಶ್ಲೋಕಗಳನ್ನು ಹೇಳಲು ಮುಂದಾಗದಿರುವುದರಿಂದ ಹಿಂದು ಸಂಸ್ಕೃತಿಯ ಉನ್ನತಿಗೆ ತೊಡ ಕಾಗಿದೆ’ ಎಂದು ಅಭಿಪ್ರಾಯಪಟ್ಟರು.