ಇದೇ ಸಂದರ್ಭದಲ್ಲಿ ಭತ್ತದ ಹುಲ್ಲಿನ ಭಣವೆ ಸುಟ್ಟ ಭಾಮಣಗಿಯ ಸೀತಾರಾಮ ಮಿರಾಶಿಯವರಿಗೆ ₹ 10 ಸಾವಿರ ಚೆಕ್ ವಿತರಿಸಲಾಯಿತು. ರಿಯಾಯತಿ ದರದಲ್ಲಿ ಧಾನ್ಯ ಸಂಗ್ರಹಣಾ ಪೆಟ್ಟಿಗೆಯನ್ನು ಶಾಂತಾ ಹರಿಜನ, ಗಣಪತಿ ಹರಿಜನ, ಬಂಡು ಗಾಂಜೇಕರ ಅವರಿಗೆ ವಿತರಿಸಲಾಯಿತು. ತುಕಾರಾಮ ಪಾಂಡುರಂಗ ನಾಯ್ಕ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ಸಂಜಯ ಹಣಬರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ಶ್ರೀಕಾಂತ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ದೇಸಾಯಿ, ತಹಶೀಲ್ದಾರ್ ಟಿ.ಸಿ.ಹಾದಿಮನಿ ಇತರರು ಹಾಜರಿದ್ದರು.