ಆದರೆ, ಹಾವೇರಿ ತಹಶೀಲ್ದಾರರು ಮಾತ್ರ ಪಡಿತರ ಚೀಟಿ ಕಾರ್ಯವನ್ನು ನಿರ್ವಹಿಸುವಂತೆ ಒತ್ತಡ ಹೇರುತ್ತಾರೆ. ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ನಿಂದಿಸುತ್ತಾರೆ. ಅಲ್ಲದೇ, ಪ್ರತಿ ತಿಂಗಳು ಕ್ಲುಪ್ತ ಸಮಯಕ್ಕೆ ಸಂಬಳ ಬಿಡುಗಡೆ ಮಾಡುವುದಿಲ್ಲ’ ಎಂದಿದ್ದಾರೆ.‘ಬರದಲ್ಲೂ ಕರ್ತವ್ಯ ನಿರ್ಲಕ್ಷಿಸುವ ಸಿಬ್ಬಂದಿಗೆ ಏನು ಮಾಡಬೇಕು?’: ‘ತಾಲ್ಲೂಕಿನಲ್ಲಿ ತೀವ್ರ ಬರ ಇದ್ದು, ಎಲ್ಲ ಸಿಬ್ಬಂದಿ ತ್ವರಿತಗತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಈಗಲೂ ಕರ್ತವ್ಯ ನಿರ್ಲಕ್ಷಿಸುವ ಸಿಬ್ಬಂದಿಗೆ ಕೆಲಸ ಮಾಡುವಂತೆ ಒತ್ತಡ ಹೇರದೇ ಬಿಡಬೇಕೇ?’ ಎಂದು ತಹಶೀಲ್ದಾರ್ ಜಿ.ಬಿ. ಮಜ್ಜಗಿ ಪ್ರತಿಕ್ರಿಯಿಸಿದ್ದಾರೆ.