ಗ್ರಾಮದ ಶಿವಲಿಂಗಪ್ಪ ಬೇವಿನಕಟ್ಟಿ ಎಂಬುವವರು ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ರೇಣುಕಾ ಎಂಜಿನಿಯರಿಂಗ್ ಓದುವ ಪುತ್ರನೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ಅನಾರೋಗ್ಯಪೀಡಿತ ಶಿವಲಿಂಗಪ್ಪ ಅವರನ್ನು ಸೋದರತ್ತೆ ಸಾವಂತೆವ್ವ ಅವರೇ ನೋಡಿಕೊಳ್ಳುತ್ತಿದ್ದರು. ಎಂಟು ವರ್ಷಗಳ ಹಿಂದೆ ಶಿವಲಿಂಗಪ್ಪ 19 ಎಕರೆ ಜಮೀನು ಮಾರಿದ್ದು, ಆಗ ಬಂದ ಹಣವನ್ನು ಪತ್ನಿಯ ಹೆಸರಿನಲ್ಲಿ ಠೇವಣಿ ಇಟ್ಟಿದ್ದಾರೆ ಎನ್ನಲಾಗಿದೆ.