ಸಿದ್ದಾಪುರ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ ಘಟನೆ ಬೆಳ್ವೆ ಪಂಚಾಯಿತಿ ವ್ಯಾಪ್ತಿಯ ಅಲ್ಬಾಡಿ ಮೂರುಕೈ ಎಂಬಲ್ಲಿ ನಡೆದಿದೆ.ಚೆನ್ನಗಿರಿ ಮೂಲದ ಭೀಮ ಚಾಟಿ ಎಂಬವನು ಎರಡು ದಿನಗಳ ಹಿಂದೆ ಅಲ್ಬಾಡಿ ಪರಿಸರದಲ್ಲಿ ದೇವಿ ಭಾವಚಿತ್ರ ಹಿಡಿದು ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ದೇವರ ಹೆಸರಿನಲ್ಲಿ ಭಿಕ್ಷೆ ಕೇಳುತ್ತಿರುವುದರಿಂದ ಗ್ರಾಮಸ್ಥರು ಬಿಡಿಗಾಸು ನೀಡಿ ಕಳುಹಿಸುತ್ತಿದ್ದರು. ಆದರೆ ಅಲ್ಬಾಡಿ ಜಲಜಾ ಕೊಠಾರ್ತಿ ಎಂಬ ವೃದ್ಧೆ ಮನೆಗೆ ತೆರಳಿದ ಈತ ಕುಡಿಯಲು ನೀರು ಕೇಳಿದ್ದನು.