ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ರಾಜಕೀಯ ಬೆರೆಸಿ ಸಂತ್ರಸ್ತರ ಹಿತರಕ್ಷಣಾ ಸಮಿತಿಯನ್ನು ಒಡೆಯುವ ಹುನ್ನಾರ ನಡೆಸಬಾರದು. ಅದರಿಂದ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯವಾಗದು ಎಂದರು.ಮಾಜಿ ಶಾಸಕ ಸಿದ್ದು ಸವದಿ, ವಕೀಲ ಎನ್.ಎಸ್. ದೇವರವರ ಮಾತನಾಡಿದರು. ಸಮಿತಿ ಅಧ್ಯಕ್ಷ ಮುತ್ತು ದೇಸಾಯಿ, ಮಾಜಿ ಶಾಸಕ ಜಯವಂತ ಕಾಳೆ, ವಕೀಲ ಜಿ.ಕೆ. ಮಠದ, ಸಿದ್ದನಗೌಡ ವಲ್ಲಿಗೌಡರ, ಬಿ.ಎಸ್. ಸಿಂಧೂರ, ಸಿ.ಆರ್. ಸುತಾರ, ಡಾ.ಉಮೇಶ ಮಹಾಬಳಶೆಟ್ಟಿ, ಟಿ.ಎ. ಬಿರಾದಾರ, ಎಂ.ಎಂ. ಹಟ್ಟಿ, ಎಸ್.ಬಿ. ಪಾಟೀಲ, ಪಿ.ಆರ್. ಪಾಲಬಾವಿ, ಕಾಡು ಮಾಳಿ ಮತ್ತಿತರರು ವೇದಿಕೆಯಲ್ಲಿದ್ದರು.