ಚೆನ್ನೈ: ಬಾಹುಬಲಿ–2 ಸಿನಿಮಾದ ತಮಿಳು ನಟ ಸತ್ಯರಾಜ್ ಅವರು ಕನ್ನಡ ಹೋರಾಟಗಾರರ ಹೋರಾಟಕ್ಕೆ ತಲೆಬಾಗಿ ಕೊನೆಗೂ ಕನ್ನಡಿಗರ ಕ್ಷಮೆ ಕೋರಿದ್ದಾರೆ.
ಸತ್ಯರಾಜ್ ಅವರು ಕ್ಷಮೆ ಕೋರಿರುವ ಬಗ್ಗೆ ಇಂಗ್ಲಿಷ್ನ ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.
9 ವರ್ಷಗಳ ಹಿಂದೆ ಕಾವೇರಿ ಗಲಾಟೆ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ನೋವಾಗಿದ್ದರೆ ಕ್ಷಮಿಸಿ ಎಂದು ಸತ್ಯರಾಜ್ ಕ್ಷಮೆ ಕೋರಿದ್ದಾರೆ.
ನಾನು ಕನ್ನಡ ವಿರೋಧಿ ಅಲ್ಲ, ಕನ್ನಡಿಗರಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ, ನನ್ನನ್ನು ಕ್ಷಮಿಸಿ ಬಾಹುಬಲಿ–2 ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ಸತ್ಯರಾಜ್ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.