ಹೀರಾ ಶುಗರ್ಸ್ ಎಂ.ಡಿ ಡಾ.ಅಶೋಕ ಪಾಟೀಲ, ಯುವ ಧುರೀಣ ಪೃಥ್ವಿ ಕತ್ತಿ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ ಮಾತನಾಡಿ 14 ಹಳ್ಳಿಯ ಜನ, ಜಾನುವಾರುಗಳಿಗೆ ಕಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸೌಕರ್ಯದ ಜೊತೆಗೆ ಅಂದಾಜು 10 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಕಲ್ಪಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ಈ ಭಾಗದ ರೈತರಿಗೆ ಬೇಸಿಗೆಯಲ್ಲಿ ₹50 ಕೋಟಿ ಹೆಚ್ಚುವರಿ ಆದಾಯ ಮತ್ತು ಕಾರ್ಖಾನೆಗಳಿಗೆ 2 ಲಕ್ಷ ಟನ್ ಹೆಚ್ಚು ಕಬ್ಬು ದೊರಕಲು ಈ ಸಂಗ್ರಹಿತ ನೀರಿನಿಂದ ಸಾಧ್ಯ ಎಂದರು.