ಸಿ.ಪಿ.ಕೆ.ಯಂಥ ಹಿರಿಯರು ಜನಸಂಖ್ಯೆ ಸಂಪತ್ತಲ್ಲವೆ? ಎಂದು ಪ್ರಶ್ನಿಸಿಕೊಂಡು ಧೃತರಾಷ್ಟ್ರನನ್ನು ಸ್ಮರಿಸಿಕೊಂಡಿರುವುದು (ಪ್ರ.ವಾ.ಏ.19) ವಿಪರ್ಯಾಸ. ಏಕೆಂದರೆ ಧೃತರಾಷ್ಟ್ರನ ಬಹುಸಂಖ್ಯಾ ಮಕ್ಕಳು ಕುರುಕ್ಷೇತ್ರ ಯುದ್ಧಕ್ಕೆ ಕಾರಣರಾದರು. ಅದರ ಅನರ್ಥ ಲೋಕ ವಿದಿತ. ಪ್ರಸ್ತುತಕ್ಕೆ ‘ಮಕ್ಕಳಿರಲವ್ವ ಮನೆತುಂಬ’ ಎಂಬ ಮಾತು ಅಪ್ರಸ್ತುತ.
-ಪ್ರೊ.ಶಿವರಾಮಯ್ಯ, ಬೆಂಗಳೂರು