ಸಂಸ್ಥೆ ನಡೆಸಿದ ಸಮೀಕ್ಷೆಯನ್ನು ಬುಧವಾರ ಬಿಡುಗಡೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಬಾಡಿಗೆದಾರರು ಮತ್ತು ಮನೆಯ ಮಾಲೀಕರು ₹200 ನೀಡಿ ನೋಂದಣಿ ಮಾಡಿಸಿದರೆ ಸಾಕು, ಮಧ್ಯವರ್ತಿ ಶುಲ್ಕ ನೀಡಬೇಕಿಲ್ಲ. ಬೇಡಿಕೆಗೆ ಅನುಸಾರವಾಗಿ ಇಬ್ಬರ ನಡುವೆ ಕರಾರು ಪತ್ರವನ್ನೂ ಸಂಸ್ಥೆಯೇ ಸಿದ್ಧಪಡಿಸಿ ಕೊಡಲಿದೆ’ ಎಂದು ಅಖಿಲ್ ಗುಪ್ತಾ ತಿಳಿಸಿದರು.
ಇದರಿಂದ ಸಾಕಷ್ಟು ಸಮಯ, ಹಣ , ಇಂಧನ ಉಳಿತಾಯದ ಜತೆಗೆ ಪರಿಸರ ಸಂರಕ್ಷಣೆ, ಸಂಚಾರ ದಟ್ಟನೆ ನಿಯಂತ್ರಣ ಕ್ಕೆ ಸಂಸ್ಥೆ ಪರೋಕ್ಷವಾಗಿ ನೆರವಾಗಲಿದೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತೇಜಸ್ವಿ ರಾಠೋಡ್ ತಿಳಿಸಿದರು. ಮಾಹಿತಿಗೆ 92417 00000.