ಕಡೂರು: ತಮಿಳು ಚಿತ್ರನಟ ಸತ್ಯರಾಜ್ ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡಬಣ) ಕಾರ್ಯಕರ್ತರು ಸತ್ಯರಾಜ್ ಪ್ರತಿಕೃತಿ ದಹಿಸಿದರು.
ಸಂಘಟನೆಯ ಸದಸ್ಯರು ಕಡೂರಿನ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ತನಕ ಮೆರವಣಿಗೆಯಲ್ಲಿ ಸಾಗಿ ನಂತರ ವೃತ್ತದ ಬಳಿ ಪ್ರತಿಕೃತಿ ದಹಿಸಿದರು.
ತಾಲ್ಲೂಕು ಅಧ್ಯಕ್ಷ ಎಸ್.ಎಚ್. ಆನಂದ್, ಉಪಾಧ್ಯಕ್ಷ ಕೆ.ಕಿರಣ್ ಕುಮಾರ್, ಎಸ್.ಕೆ.ಸಂತೋಷ್, ಕೆ.ಸಿ. ಮಂಜುನಾಥ್, ನಗರ ಘಟಕದ ಅಧ್ಯಕ್ಷ ಕೆ.ಪಿ.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಣೇಶ್, ಸಂದೀಪ್, ನಾಗೇಂದ್ರ, ಅರುಣ್, ಮತ್ತಿತರರು ಇದ್ದರು.