ಸಭೆ ಮಧ್ಯೆ ಇದ್ದಕ್ಕಿದ್ದಂತೆ ಗರಂ ಆದ ಅವರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ವಿರುದ್ಧ ಹರಿಹಾಯ್ದರು.
‘ಕೃಷಿ ಜಂಟಿ ನಿರ್ದೇಶಕರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಂಥ ವರ್ತನೆಯಿಂದ ಜಿಲ್ಲೆಗೆ ಕಳಂಕ ಬರುತ್ತೆ. ರೈತರು ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.