ಮರಳು ತುಂಬಲು ಯಂತ್ರ ಬಳಸ ಲಾಗಿದ್ದು, ಭಾರದಿಂದಾಗಿ ಅದು ನದಿ ಒಡಲಲ್ಲೇ ಕುಸಿದು ನಿಂತಿದೆ. ಇದರ ಪಕ್ಕದಲ್ಲೇ ಮರಳು ಗುಪ್ಪೆ ಹಾಕಲಾಗಿದ್ದು ಇದರ ಸುತ್ತಲೂ ನದಿಯಲ್ಲಿ ಕಂದಕ ನಿರ್ಮಾಣವಾಗಿದೆ.ಸುಮಾರು 50ಕ್ಕೂ ಹೆಚ್ಚು ಬ್ರಾಸ್ ಮರಳು ಸಂಗ್ರಹವನ್ನು ನದಿ ಮತ್ತು ದಂಡೆಯ ಮೇಲೆ ಮಾಡಲಾಗಿದೆ. ಇಲ್ಲಿಂದ ಮರಳು ಎತ್ತಲು ಪರವಾನಗಿ ಇರಲಿಲ್ಲ ಎಂದು ಬೈಲಹೊಂಗಲ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ತಿಳಿಸಿದರು.