ತರೀಕೆರೆ: ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಉಡೇವಾ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟಿಸಿದರು.ಲಿಂಗದಹಳ್ಳಿ ಹೋಬಳಿಯ ಉಡೇವಾ ಗ್ರಾಮದಲ್ಲಿ ಬರಗಾಲ ದಿಂದಾಗಿ ಜನ ಜಾನುವಾರಿಗೆ ಕುಡಿ ಯಲು ನೀರಿಲ್ಲದೇ ತೊಂದರೆಯಾಗಿದ್ದು, ಗ್ರಾಮದ ತೊಟ್ಟಿಗಳಲ್ಲಿ ಕುಡಿಯಲು ನೀರಿಲ್ಲದೇ ಜಾನುವಾರುಗಳು ಪರಿತಪಿಸುತ್ತಿವೆ. ತಾಲ್ಲೂಕಿನ ಕಲ್ಲತ್ತಿಗಿರಿಯಿಂದ ಈ ಗ್ರಾಮಕ್ಕೆ 8 ದಿನಗಳಿಗೊಮ್ಮೆ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದು, ಇದರಿಂದಾಗಿ 4 ರಿಂದ 6 ಕೊಡ ಮಾತ್ರ ಸಿಗುತ್ತಿದೆ.