ದೂರವಾಣಿ ಮೂಲಕ ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ಈಗ ಹಿಡಕಲ್ ಜಲಾಶಯದಿಂದ ಜಿಎಲ್ಬಿಸಿ ಕಾಲುವೆ ಬಿಟ್ಟಿರುವ ನೀರಿಗಾಗಿ ಹಾಹಾಕಾರ ಎದ್ದಿದೆ. ಮೇಲ್ಭಾಗದ ಬಲಾಢ್ಯರಿಂದ ಹಿಡಕಲ್ ಜಲಾಶಯದಿಂದ ಬಿಟ್ಟಿರುವ ನೀರು ಭಾನುವಾರ ಸಂಜೆವರೆಗೂ ಮುಧೋಳ ತಾಲ್ಲೂಕು ತಲುಪಿಲ್ಲ. ಹೀಗಾಗಿ ರೊಚ್ಚಿಗೆ ಎದ್ದಿರುವ ರೈತ ಸಮುದಾಯ ಹೋರಾಟದ ಹಾದಿಯನ್ನು ಹಿಡಿಯಲಿದ್ದಾರೆ’ ಎಂದು ಎಚ್ಚರಿಸಿದರು.