ಓಂ ಬಹದ್ದೂರ್ ಮೃತಪಟ್ಟಿದ್ದರೆ, ಕಿಶೋರ್ ಬಹದ್ದೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಸುಕಿನ ವೇಳೆ ಎರಡು ವಾಹನಗಳಲ್ಲಿ ಸುಮಾರು 10 ಜನರ ಗುಂಪು ಈ ಪ್ರದೇಶ ಪ್ರವೇಶಿಸಿದ್ದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ದುಷ್ಕರ್ಮಿಗಳ ಪತ್ತೆಗೆ ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ನೀಲಗಿರಿ ಜಿಲ್ಲೆಯ ಎಲ್ಲ ತಪಾಸಣಾ ನೆಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದೆ.
ಈ ಬಂಗಲೆಯು ಜಯಲಿಲತಾ ಒಡೆತನಕ್ಕೆ ಸೇರಿದ್ದೇ ಅಥವಾ ಅಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.