ಶ್ರೀನಗರ : ವಿದ್ಯಾರ್ಥಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಶ್ರೀನಗರ ಕೇಂದ್ರ ಭಾಗದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ 12 ಜನ ಭದ್ರತಾ ಸಿಬ್ಬಂದಿ ಸೇರಿದಂತೆ 24 ಜನ ಗಾಯಗೊಂಡಿದ್ದಾರೆ.
ಸರ್ಕಾರದ ಆದೇಶದ ಅನುಸಾರ ಕಾಲೇಜುಗಳನ್ನು ಐದು ದಿನ ಮುಚ್ಚಲಾಗಿತ್ತು. ಅವು ಪುನರಾರಂಭಗೊಂಡ ಕೆಲವೇ ಹೊತ್ತಿನಲ್ಲಿ ಈ ಘರ್ಷಣೆ ನಡೆದಿದೆ.
ರೆಸಿಡೆನ್ಸಿ ರಸ್ತೆ ಹಾಗೂ ಎಂ.ಎ. ರಸ್ತೆಗಳು ಕದನ ಕಣದಂತೆ ಆಗಿದ್ದವು. ‘ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಲ್ಲಿ ಮೂರು ಜನ ಅಧಿಕಾರಿಗಳು ಸೇರಿದಂತೆ 12 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.