ಬಸವಣ್ಣನವರ ಪುತ್ಥಳಿಗೆ ತೆಲಂಗಾಣ ಶಾಸಕ ಚಿಟ್ಟಂ ರಾಮಮೋಹನರೆಡ್ಡಿ ಪೂಜೆ ಸಲ್ಲಿಸಿದರು. ಬಾಡಿಯಾಲ– ಮಳಖೇಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಡೇಚೂರು ಸಂಸ್ಥಾನ ಹಿರೇಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗಂವ್ಹಾರ ಮಠದ ಸೋಪಾನಾಥ ಸ್ವಾಮೀಜಿ, ಚೇಗುಂಟಾ ಮಠದ ಡಾ.ಕ್ಷೀರಲಿಂಗ ಸ್ವಾಮೀಜಿ, ಗುರ್ಜಾಲ ಮಠದ ಸೂಗೂರಯ್ಯ ಸ್ವಾಮೀಜಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಶಾಸಕ ಡಾ.ಎ.ಬಿ. ಮಾಲಕರಡ್ಡಿ, ನಿವೃತ್ತ ಅಧಿಕಾರ ಶಂಕರ ಬಿದರಿ, ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ, ವೆಂಕಟರೆಡ್ಡಿ ಮುದ್ನಾಳ, ಮಕ್ತಲ್ ವೀರಶೈವ ಸಮಾಜದ ಅಧ್ಯಕ್ಷ ಗುಡಿಗಂಡ್ಲ ವೀರೇಶ, ಗುರುಪ್ರಸಾದ ಸ್ವಾಮಿ ಉಪಸ್ಥಿತರಿದ್ದರು.