‘1913ಕ್ಕಿಂತ ಮೊದಲು ಬಸವ ಜಯಂತಿ ಆಚರಣೆ ಇರಲಿಲ್ಲ. ಆದರೆ, ಮುರುಘಾಮಠದ ಮೃತ್ಯುಂಜಯಪ್ಪಗಳು ಮತ್ತು ಹರ್ಡೇಕರ ಮಂಜಪ್ಪ ಅವರು ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದರು. ಸದ್ಯ ಶತಮಾನೋತ್ಸವ ಆಚರಿಸಿರುವ ಮುರುಘಾಮಠಕ್ಕೆ ಇದು ಹೆಮ್ಮೆಯ ಸಂಗತಿ’ ಎಂದರು.‘ಏ.29ರಂದು ಬಸವ ಜಯಂತಿ ಆಚರಣೆ ಜರುಗಲಿದೆ. ಈ ನಿಮಿತ್ತ ಅಂದು ಬೆಳಿಗ್ಗೆ ಇಲ್ಲಿನ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಬಸವ ಜಯಂತಿ ಉತ್ಸವಕ್ಕೆ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡುವರು. ಮಧ್ಯಾಹ್ನ 3ಕ್ಕೆ ಕಲಾ ಭವನದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಶರಣ, ಶರಣೆಯರ ಭಾವಚಿತ್ರಗಳ ಮೆರವಣಿಗೆ ನಡೆಯಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುರುಘಾಮಠ ತಲುಪಿ ಸಮಾಪ್ತಿಗೊಳ್ಳಲಿವೆ’ ಎಂದರು.