ಶಿರಸಿ: ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಹೇಳಿಕೆಯಿಂದ ಬೇಸರಗೊಂಡ ಪರಿಸರವಾದಿಯೊಬ್ಬರು ವನ್ಯಪ್ರಾಣಿಗಳ ಜಲದಾಹ ಇಂಗಿಸಲು ಅರಣ್ಯದ ಮಧ್ಯೆ ಇದ್ದ ಕೆರೆಯೊಳಗೆ ಕೆರೆಯೊಂದನ್ನು ನಿರ್ಮಿಸಿದ್ದಾರೆ.ಅಪ್ಪಿಕೊ ಚಳವಳಿ ಮೂಲಕ ಮನೆಮಾತಾಗಿರುವ ಪಾಂಡುರಂಗ ಹೆಗಡೆ ಅವರು ತಾಲ್ಲೂಕಿನ ಅಪ್ಪಿಕೊಪ್ಪದ ಅರಣ್ಯ ಪ್ರದೇಶದಲ್ಲಿರುವ ಚೌಡಿಕೆರೆಯ ಭಾಗಶಃ ಜಾಗದ ಹೂಳನ್ನು ₹ 1.75 ಲಕ್ಷ ವೆಚ್ಚದಲ್ಲಿ ತೆಗೆಯಿಸಿದ ಪರಿಣಾಮ ಬೇಸಿಗೆಯಲ್ಲೂ ಕೆರೆಯಲ್ಲಿ ಜಲ ನಗುತ್ತಿದೆ.