‘ಇಂದು ವಿಶ್ವದ ಎಲ್ಲ ರಾಷ್ಟ್ರಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಸೇರಿಸಿದರೆ ಜಗತ್ತನ್ನು 100 ಬಾರಿ ನಾಶ ಮಾಡಬಹುದು. ಈ ಎಲ್ಲ ಶಸ್ತ್ರಾಸ್ತ್ರ ಗಳಿಂದ ಆಗುವ ಪ್ರಯೋಜನವಾದರೂ ಏನು? ಕರುಣೆ, ಅಹಿಂಸೆ, ಸನ್ನಡತೆಯ ಮಾರ್ಗವನ್ನು ಎಲ್ಲ ರಾಷ್ಟ್ರಗಳು ಅನುಸರಿಸಿ ಹೊಂದಾಣಿಕೆಯಿಂದ ಬಾಳ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜಯಂತ ಕಾಯ್ಕಿಣಿ ಹಾಗೂ ಮಹಾಬಲೇಶ್ವರ ಸೈಲ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ಎಸ್.ಪಿ.ಕಾಮತ, ಶಾಂತಾರಾಮ ಕುಲಕರ್ಣಿ, ಕಿಶೋರ ಕುಲಕರ್ಣಿ ಹಾಜರಿದ್ದರು.