ಹಸಿವಿನಿಂದ ತತ್ತರಿಸಿ, ಹೆಣ್ಣಾಗಿ ಹುಟ್ಟಿ ‘ಚಿಂದಿ’, ‘ದಗಡಿ’ ಎನಿಸಿಕೊಂಡು ರೈಲಿನಲ್ಲಿ ಭಿಕ್ಷೆ ಬೇಡಿ, ಮಗಳನ್ನು ಅನಾಥಾಲಯಕ್ಕೆ ಸೇರಿಸಿ, ಸಂಘರ್ಷದ ಬದುಕಿನಿಂದ ಹಂಚಿ ತಿನ್ನುವುದನ್ನು ಕಲಿತು, ಆರು ಅನಾಥಾಲಯಗಳನ್ನು ನಡೆಸುತ್ತಾ ಸಾವಿರಾರು ಮಕ್ಕಳ ಹಸಿವಿನ ಬೆಂಕಿಯನ್ನು ಆರಿಸಿ ಮಹಾಮಾತೆಯಾದ ಸಿಂಧೂತಾಯಿ ಸಪಕಾಳ್ ಅವರನ್ನು ಕರ್ನಾಟಕ ಸರ್ಕಾರವು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ತುಂಬಾ ಗೌರವದ ವಿಚಾರ.