ಮುಸುಕುಧಾರಿಗಳ ಗುಂಪು ಕಿರಣಿ ವ್ಯಾಪಾರ ಮಾಡುವ ಶರಣಮ್ಮ ಸಂಗಣ್ಣ ಗಂಟೇರ್ (30) ಅವರ ತಲೆಗೆ ಬಡಿಗೆಯಿಂದ ಹೊಡೆದು, ಆಸಿಡ್ ಎರಚಿ ಕೊಲೆ ಮಾಡಲು ಯತ್ನಿಸಿದೆ. ಆಸಿಡ್ ದಾಳಿಯಿಂದ ಅವರ ಮುಖ ಹಾಗೂ ದೇಹದ ಕೆಲವು ಕಡೆ ಸುಟ್ಟ ಗಾಯವಾಗಿದ್ದು, ರಾಯಚೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.