ಆ ಬಳಿಕ, ಲಿಂಗಪ್ಪ ಬದಲು ಜಿ.ಸಿ. ಚಂದ್ರಶೇಖರ್ ಅವರನ್ನು ನೇಮಕ ಮಾಡಬೇಕು ಎಂಬ ಲಾಬಿ ಬಲವಾಗಿತ್ತು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ ಅವರು ಲಿಂಗಪ್ಪ ಬೆಂಬಲಕ್ಕೆ ನಿಂತಿದ್ದರಿಂದಾಗಿ ಚಂದ್ರಶೇಖರ್ ಯತ್ನ ಫಲ ಕೊಟ್ಟಿರಲಿಲ್ಲ.
ಈ ಮಧ್ಯೆ, ಕೊನೆಗಳಿಗೆಯಲ್ಲಿ ಪಟ್ಟಿ ಬದಲಾವಣೆಯಾಗಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹರಡಿತ್ತು. ಕೆ.ಪಿ. ನಂಜುಂಡಿ ಬದಲು ತಿಗಳರ ಸಮುದಾಯಕ್ಕೆ ಸೇರಿರುವ, ಬೆಂಗಳೂರಿನ ಮಾಜಿ ಮೇಯರ್ ಪಿ.ಆರ್. ರಮೇಶ್ ಹೆಸರು ಪರಿಶೀಲನೆಯಲ್ಲಿದೆ.