‘ಮಗಳು ಹಾಗೂ ಮಂಜು ಮನೆಯಲ್ಲಿ ಒಟ್ಟಿಗೇ ಇದ್ದುದನ್ನು ನೋಡಿದ್ದರಿಂದ ಸಿಟ್ಟು ಬಂದು ಕೊಲೆ ಮಾಡಿದ್ದಾಗಿ ಯಲ್ಲಪ್ಪನೇ ತಿಳಿಸಿದ್ದಾನೆ. ತಾನಾಗಿಯೇ ಸವದತ್ತಿ ಠಾಣೆಗೆ ಶರಣಾಗಿದ್ದಾನೆ. ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.