ಮೆಟ್ರಿ ಗ್ರಾಮದ ಗುಂಡೆಹನುಮಪ್ಪ, ಹೊಸಕೆರೆ, ಕೆಂಪುವಡ್ಲು, ಕಾಸಿಹಳ್ಳ ವ್ಯಾಪ್ತಿಯಲ್ಲಿ 903 ಎಕರೆ ಖುಷ್ಕಿ ಭೂಮಿ ಇದ್ದು, ತುಂಗಭದ್ರಾ ಎಚ್ಎಲ್ಸಿ 1ಆರ್ ನಂ.2 ವಿತರಣಾ ಕಾಲುವೆ ಮೂಲಕ ಕೆರೆಗೆ ನೀರು ಒದಗಿಸಿದಲ್ಲಿ ರೈತರಿಗೆ ತುಂಬಾ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸುವಂತೆ ಗ್ರಾಮದ ನೀರಾವರಿ ಯೋಜನಾ ಸಮಿತಿ ಸದಸ್ಯರಾದ ಜಿ. ಜಡೇಗೌಡ, ಬಿ. ಚಿದಾನಂದಪ್ಪ ಇತರೆ ರೈತರು ಮನವಿ ಮಾಡಿದ್ದಾರೆ.