ಪರಿಸರ ರಕ್ಷಣೆಯ ಅಗತ್ಯವನ್ನು ಹೇಳುವ ಸಿನಿಮಾ ‘ಮಾಸ್ತಿ ಗುಡಿ’. ಈ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ನಟರಾದ ಅನಿಲ್ ಕುಮಾರ್ ಹಾಗೂ ರಾಘವ್ ಉದಯ್ ದುರ್ಮರಣಕ್ಕೆ ತುತ್ತಾಗಿದ್ದರು. ಹಾಗಾಗಿ ಸಿನಿಮಾವನ್ನು ಅವರಿಗೆ ಅರ್ಪಿಸಲಾಗಿದೆ.
ನಿರ್ದೇಶನ ನಾಗಶೇಖರ್, ಸಂಗೀತ ಸಾಧು ಕೋಕಿಲ, ಛಾಯಾಗ್ರಹಣ ಸತ್ಯ ಹೆಗಡೆ ಅವರದ್ದು. ದುನಿಯಾ ವಿಜಯ್, ಅಮೂಲ್ಯಾ, ಕೃತಿ ಕರಬಂಧ, ರಂಗಾಯಣ ರಘು, ಶ್ರೀನಿವಾಸಮೂರ್ತಿ, ಸುಹಾಸಿನಿ, ದತ್ತಣ್ಣ, ಬಿ. ಜಯಶ್ರೀ, ದೇವರಾಜ್, ಶೋಭರಾಜ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸುಂದರ್ ಗೌಡ, ಅನಿಲ್ ಕುಮಾರ್ ಇದರ ನಿರ್ಮಾಪಕರು.
*
ಲಿಫ್ಟ್ ಮ್ಯಾನ್
ಕಾರಂಜಿ ಶ್ರೀಧರ್ ನಿರ್ದೇಶನದ ಸಿನಿಮಾ ‘ಲಿಫ್ಟ್ ಮ್ಯಾನ್’. ಸುಂದರ್ ರಾಜ್, ಸುನಿಲ್ ಪುರಾಣಿಕ್, ಸುರೇಶ್ ಹೆಬ್ಳೀಕರ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಚಂದ್ರ ಬಾರ್ಕೂರ್ ಅವರ ‘ಲಿಫ್ಟ್ ಮ್ಯಾನ್’ ಕಾದಂಬರಿ ಆಧರಿಸಿದೆ ಈ ಚಿತ್ರ. ರಾಮ್ ಅವರು ಇದರ ನಿರ್ಮಾಪಕರು.