‘ನಾನು ಬಿಎ ಓದಿ, ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದೇನೆ. ಕೆಲಸ ಸಿಗದ ಕಾರಣ ನನಗಿರುವ ಸ್ವಲ್ಪ ಸ್ವಂತ ಭೂಮಿಯಲ್ಲಿ ಒಣಬೇಸಾಯ ಮಾಡಿ, ಮಕ್ಕಳನ್ನು ಓದಿಸುತ್ತಿದ್ದೇನೆ. ನಾನು ಎದುರಿಸಿದ ಕಷ್ಟ ಮಕ್ಕಳಿಗೆ ಭವಿಷ್ಯದಲ್ಲಿ ಬರಬಾರದು. ಸಾಲ ಮಾಡಿಯಾದರೂ ಮಕ್ಕಳಿಗೆ ಚೆನ್ನಾಗಿ ಓದಿಸಿ, ಸ್ವಾವಲಂಬಿ ಜೀವನ ಸಾಗಿಸುವಂತೆ ಮಾಡುತ್ತೇನೆ.