ಸಂಭಾಷಣೆ ಪ್ರಧಾನವಾಗಿರುವ ಶ್ರೀರಂಗರ ನಾಟಕಗಳ ಪೈಕಿ ‘ರಂಗ ಭಾರತ’ವನ್ನು ರಂಗದ ಮೇಲೆ ತರುವಾಗ ಮಾತನ್ನು ಗೌಣವಾಗಿಸಿ ಪ್ರದರ್ಶನ ಕಳೆಕಟ್ಟುವಂತೆ ಮಾಡಿದ್ದು ಬಾಪಟ್ರ ವಿಶೇಷತೆ. ರಂಗ ವಿನ್ಯಾಸದ ಬಗ್ಗೆ ಅವರಿಗೆ ಅಪೂರ್ವ ಕಲ್ಪನೆ ಇತ್ತು ಎಂದು ಹೇಳಿದರು.
ಪತ್ರಕರ್ತ ಎಚ್.ಬಿ.ರಾಘವೇಂದ್ರ, ರಂಗ ನಿರ್ದೇಶಕ ಗೌರಿಶಂಕರ್ ಪ್ರತಿಕ್ರಿಯಿಸಿದರು. ರಂಗಕರ್ಮಿ ಎಸ್.ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಅಧ್ಯಕ್ಷ ಬಸ್ತಿ ಸದಾನಂದ ಪೈ ಹಾಜರಿದ್ದರು. ಮಂಜುನಾಥ್ ಜೇಡಿಕುಣಿ ಗೋಷ್ಠಿಯನ್ನು ನಿರ್ವಹಿಸಿದರು.