ಜ್ಞಾನೇಶ್ವರ ಮಠದ ಹತ್ತಿರದ ಹೆಬ್ಬಾಳಪ್ಪಾ ಭಜಂತ್ರಿ ಅವರ ಮನೆಯ ಮೇಲ್ಛಾವಣಿ ಕುಸಿದಿದ್ದು ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ . ಮುಧೋಳ ರಸ್ತೆಯ ಜನತಾ ಫ್ಲಾಟ್ ನಿವಾಸಿಗಳಾದ ಪಾರ್ವತಿವ್ವಾ ಚೌಧರಿ ಮತ್ತು ರಂಗಪ್ಪ ಬರಗಿಯವರ ಮನೆಗೆ ನುಗ್ಗಿದ ಮಳೆ ನೀರು ಮತ್ತು ಚರಂಡಿ ನೀರನ್ನು ಮನೆಯಿಂದ ಹೊರ ಹಾಕಲು ಮನೆಯವರು ಹರಸಾಹಸ ಪಡಬೇಕಾಯಿತು.