‘ಭಗವಾನ್’ ಶಬ್ದಕ್ಕೆ ನಾನು ನೀಡಿದ್ದ ವಿಶ್ಲೇಷಣೆಗೆ ಚಂಪಾ ಅವರ ಪ್ರತಿಕ್ರಿಯೆ ನೋಡಿದೆ (ವಾ.ವಾ., ಮೇ 17). ನಾನು ‘ಭಗವಾನ್’ ಪದದ ಅರ್ಥವನ್ನು ತಿರುಚಿ ಹೇಳಿದ್ದಲ್ಲ.
ಎರಡೂವರೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಬುದ್ಧನ ಅನುಯಾಯಿಗಳು ಪ್ರಾರ್ಥನೆಯಲ್ಲಿ ‘ಭಗವಾನರೆಂದರೆ ಸಂಸಾರದ ಸೂತ್ರಗಳನ್ನು ಕತ್ತರಿಸಿಕೊಂಡವನು, ಆಶೆಗಳ ಬಂಧನದಿಂದ ಪಾರಾದವನು, ನಿರ್ವಾಣದ ಆಚೆಯ ದಡಕ್ಕೆ ಸಂದವನು’ ಎಂತಲೇ ಅರ್ಥೈಸಿ ಬುದ್ಧನ ವರ್ಣನೆಯನ್ನು ಮಾಡುತ್ತಾರೆ.