ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಜಮ್ಮನಕಲ್ಲು ಗುಡ್ಡದ ಬಳಿಯ ಕಲ್ಲುಪೊಟರೆಯೊಳಗೆ ಸುಮಾರು 12 ವರ್ಷ ವಯಸ್ಸಿನ ಕರಡಿ ಇರುವುದನ್ನು ಅಲ್ಲಿನ ಕ್ರಷರ್ ಕೆಲಸಗಾರರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಡೂರು ವಲಯ ಅರಣ್ಯಾಧಿಕಾರಿ ಮೋಹನ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಕರಡಿ ಸುತ್ತ ಬಲೆ ಹರಡಿತು. ನಂತರ ಸ್ಥಳೀಯರ ಸಹಕಾರದಿಂದ ಹಲಸಿನ ಹಣ್ಣು, ಬಾಳೆ ಹಣ್ಣಿನ ಗೊನೆ, ನೀರನ್ನು ಹತ್ತಿರ ಇಟ್ಟರೂ ಅದು ತಿನ್ನಲಿಲ್ಲ.