ರಸ್ತೆ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲು ಪ್ರತ್ಯೇಕ ಕಾನೂನು ರಚಿಸಬೇಕು. 2014ರ ಕಾಯ್ದೆ ಪ್ರಕಾರ ಸಮಿತಿ ರಚನೆ ಮಾಡಿ ವ್ಯಾಪಾರಿಗಳು ಒಳ್ಳೆಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ನಗರಸಭೆಯ ಕಿರುಕುಳದಿಂದ ವ್ಯಾಪಾರಸ್ಥರನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸೈಯದ್ ಮಹ್ಮದ್, ಶೇಕ್ಷಾವಲಿ, ಚಂದ್ರಕಾಂತ, ಅಬ್ದುಲ್ ಇತರರು ಭಾಗವಹಿಸಿದ್ದರು.