ಕನ್ನಡದಲ್ಲೇ ತೀರ್ಪುಗಳನ್ನು ನೀಡಿದ ವಿವಿಧ ನ್ಯಾಯಾಲಯಗಳ 88 ಮಂದಿ ನ್ಯಾಯಾಧೀಶರನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗೌರವಿಸಿದ್ದು ಒಳ್ಳೆಯ ಕ್ರಮ.
ಕನ್ನಡದಲ್ಲಿ ತೀರ್ಪನ್ನು ನೀಡುವುದರಿಂದ ಕನ್ನಡ ಭಾಷೆ ಮಾತ್ರ ಬಲ್ಲ ಕಕ್ಷಿದಾರರಿಗೆ ನ್ಯಾಯಾಲಯ ಹೇಳಿದ್ದೇನು ಎಂದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ.
ಕನ್ನಡದಲ್ಲೇ ವಾದ ಮಾಡುವ ವಕೀಲರನ್ನೂ ಮುಂದಿನ ದಿನಗಳಲ್ಲಿ ಗೌರವಿಸಲು ಕ್ರಮ ಕೈಗೊಳ್ಳಬೇಕು.
ಡಾ.ಶಿವರಾಜ ಯತಗಲ್, ಲಿಂಗಸುಗೂರು