ತಾಲ್ಲೂಕಿನ ಬಸವರಾಜಪುರ ಗ್ರಾಮದ ಬಳಿ ಕೆರೆಯ ಹಿನ್ನೀರಿನ ದಡದಲ್ಲಿ ಪ್ರವಾಸೋದ್ಯಮ ಇಲಾಖೆಯು ಸುಸಜ್ಜಿತ ದೋಣಿ ವಿಹಾರ ಕೇಂದ್ರ ನಿರ್ಮಿಸಿದೆ. ಐದು ವರ್ಷಗಳ ಹಿಂದೆ ಇದಕ್ಕೆ ₹ 5 ಕೋಟಿ ವೆಚ್ಚ ಮಾಡಲಾಗಿದೆ. ದೋಣಿವಿಹಾರ ಕೇಂದ್ರವನ್ನು ನೋಡಲು ಪ್ರತಿದಿನ ರಾಜ್ಯದವಿವಿಧ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ಬರುತ್ತಾರೆ. ಆದರೆ, ಸೌಲಭ್ಯಗಳಿಲ್ಲದ ಕಾರಣ ಬೇಸರದಿಂದ ವಾಪಸಾಗುತ್ತಾರೆ.